ಶಾಂತಿಯವರು ವಿಶಿಷ್ಟವಾಗುವುದು ಆಧುನಿಕತೆಯನ್ನು ಅವರು ಆಧುರಂಧಾನ ಮಾಡುವ ಬಗೆಯಲ್ಲಿ ಅದು ನನ್ನ ತಲೆಮಾರಿನವರು ಎದುರಿಸಿದ ಇಪ್ಪತ್ತನೆಯ ಶತಮಾನದಲ್ಲಿ ಮೂಡಿಬಂದ ಆಧುನಿಕಡೆಯಲ್ಲ ಇದು ಅತಿಆಧುನಿಕ. ನಮ್ಮ ಬದುಕಿನ 'ಫೈಬರ್'ನಲ್ಲಿಯೇ ಸೇರಿಹೋಗಿರುವ ಎಲ್ಲವನ್ನೂ ಬದಲಿಸುತ್ತಿರುವ ಆಧುನಿಕತೆ, ಇಂದಿನ ಯುವಕ ಯುವತಿಯರಿಗೆ ಹಾಗೂ ಬರಲಿರುವ ಪೀಳಿಗೆಗಳಿಗೆ ಇದರಿಂದ ಬಿಡುಗಡೆಯೇ ಸಾಧ್ಯವಿಲ್ಲ, ಅದರ ಮುಖ್ಯಲಕ್ಷಣ ನಮ್ಮ ಬದುಕಿನ ಬಾಹ್ಯವನ್ನು ಆವರಿಸಿರುವ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಬದಲಾಗಿ ಅದರ ಕೇಂದ್ರದಲ್ಲಿ ಇರುವುದು ಮೌಲ್ಯಪಲ್ಲಟ ಮತ್ತು ಮೌಲ್ಯಸೃಷ್ಟಿಗಳು. ಅವು ರೀಪ್ಲೇಸ್' ಮಾಡುತ್ತಿರುವ ಹಳೆಯ ಮೌಲ್ಯಗಳು ಬಹಳ ಒಳ್ಳೆಯವೇನೂ ಆಗಿರಲಿಲ್ಲ, ಅದರಲ್ಲೂ ಹೆಣ್ಣುಮಕ್ಕಳಿಗೆ ಅವು ಅನ್ಯಾಯವನ್ನೇ ಮಾಡುತ್ತಿದ್ದವು. ಈ ಸಂಕಲೆಗಳಿಂದ ಲಿಬರೇಟ್ ಆಗುವ ಕಿರುಹಾದಿಗಳನ್ನು ಈ ಆಧುನಿಕತೆ ತೋರಿಸಿಕೊಟ್ಟಿದೆ. ಅವು ಹೊಸ ಸಂವೇದನೆಗಳನ್ನು ಹೊಸ ಹಂಬಲಗಳನ್ನು ಹುಟ್ಟುಹಾಕಿವೆ. ಅಂಥ ಸಂವೇದನೆಗೆ ಇಲ್ಲಿನ ಅನೇಕ ಕಥೆಗಳು ನುಡಿಕೊಟ್ಟಿವೆ. ಈ ಕತೆಗಳು ಮುಖ್ಯವೆನಿಸುವದು ಕಥೆಹೇಳುವ ಧಾವಂತದಲ್ಲಿ ಅಥವಾ ಸಾಮಾಜಿಕ ನ್ಯಾಯದ ಅರಸುವಿಕೆಯಲ್ಲಿ ತಾತ್ವಿಕ ಹುಡುಕಾಟಗಳನ್ನು ಮರೆತಿರುವ ನಮ್ಮ ಕಾಲದ ಹಲವು ಕಥೆಗಾರರಿಗಿಂತ ಭಿನ್ನವಾಗುವುದರಿಂದ. ಎಚ್ ಎಸ್ ರಾಘವೇಂದ್ರ ರಾವ್