'ಸಾಸಿವೆ ತಂದವಳು' ಎನ್ನುವಂತಹ ಬಹುಗಂಭದ ವಸ್ತುವಿನ ತಮ್ಮ ಮೊದಲ ಪುಸ್ತಕದಲ್ಲಿಯೇ ಭಾರತಿಯವರ ಅಪರೂಪದ ಹಾಸ್ಯಪ್ರಜ್ಞೆಯನ್ನು ಗುರುತಿಸ ಇಹುದಾಗಿತ್ತು. ಸಾವಿನ ಸನಿಹದ ತಮ್ಮ ಪರಿಸ್ಥಿತಿಯಲ್ಲೂ ನಗುವನ್ನು ಅವರು ಇಟ್ಟುಕೊಟ್ಟಿರಲಿಲ್ಲ. ನೋವುoಕವಲಗೆ ನಗಿಸುವುದು ತರಗತವಾಗಿರುತ್ತದಂತೆ. ಈ bagedode eesd goo og ad sertades? doses ನವೀಣನಂತೆ ಸಂತೋಷದಿಂದ ತಮ್ಮ ಬದುಕಿನ ಹಲವು ನಗೆಯ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಹಾಗಂತ ಹಾಸ್ಯದ ರಭಸದಲ್ಲಿ ಬದುಕಿನ ಗಂಭೀರತೆ ಇಲ್ಲ ಲೇವಡಿಗೊಳಗಾಗಿಲ್ಲ, ಉಡಾಫೆಯಲ್ಲೂ ನಲುಗಿಲ್ಲ, ಸಾವಿನ ಆತಂಕ, ಬಡತನದ ಕಾರ್ಪಣ್ಯ, ಗಂಡನ ಮನೆಯ ಹೊಸತನಕ್ಕೆ ಹೊಂದಿಕೊಳ್ಳುವ ಸಂಕಷ್ಟ, ವಾಸ್ತುಶಾಸ್ತ್ರದ ಡೋಂಗಿಯಂತಹ ಗageರ ಸಂಗತಿಗಳು ಇಲ್ಲಿ ಸಕ್ಕರೆ ಲೇಪಿತ ಹೋಮಿಯೋಪತಿ ಮಾತ್ರೆಗಳಂತೆ ನಮಗೆ ದಕ್ಕುತ್ತವೆ. ತಮ್ಮನ್ನೇ ಗೇಲಿ ಮಾಡಿಕೊಂಡು ನಗಬಲ್ಲ ಭಾರತಿಯವರಿಗೆ, ಇನ್ನೊಬ್ಬರ ಪರಿಸ್ಥಿತಿಯನ್ನು ಕಂಡು ತಮಾಷೆ ಮಾಡುವ ಅಧಿಕಾರ ಸಹಜವಾಗಿಯೇ ದಕ್ಕುತ್ತದೆ. ಅಪ್ಪ, ಅಮ್ಮ, ಗಂಡ, ಮಗ, ಬಂಧು-ಬಳಗ, ಗೆಳೆಯರು - ಯಾರೂ ಭಾರತಿಯ ಕೈಯಿಂದ ತಪ್ಪಿಸಿಕೊಂಡಿಲ್ಲ. ಹಾಗಂತ ಇವರ ತಮಾಷೆ ಮತ್ತೊಬ್ಬರ ಮನಸ್ಸನ್ನು ನೋಯಿಸುವಂತಹದ್ದೂ ಅಲ್ಲ, ಹೋಳಿ ಹಬ್ಬದಲ್ಲಿ ಬಣ್ಣ ಉಗ್ಗಿಸಿಕೊಂಡು ಒಂದೆರಡು ಕ್ಷಣ ಮುಜುಗರಕ್ಕೊಳಗಾದರೂ, ಮತ್ತೆ ಚೇತರಿಸಿಕೊಂಡು ನಾವೂ ರಂಗಿನಾಟದಲ್ಲಿ ಸೇರಿ ಸಂಭ್ರಮ ಪಡುವಂತಹದ್ದು. ಬದುಕನ್ನು ವಿಪರೀತ ಗಂಭೀರ ಮಾಡಿಕೊಂಡು ತಲೆ ಕೆಡಿಸಿಕೊಂಡು ಕೂತಾಗ, ಇಂತಹ ಬರೆಹಗಳು ನಮ್ಮನ್ನು ಮತ್ತೆ ರೂಢಿಯ ಲಯಕ್ಕೆ ಹಚ್ಚುವುದಕ್ಕೆ ನೆರವಾಗುತ್ತವೆ. ಸದ್ಯದ ಕನ್ನಡ ಸಾಹಿತ್ಯಲೋಕದ ಪರಿಸ್ಥಿತಿಗಂತೂ ಈ ಪುಸ್ತಕ ಹಂಜೀವಿನಿ, ಎಲ್ಲರೂ ಸೇರಿ ಒಂಚೂರು ನಗುವುದು ಈ ಹೊತ್ತಿನ ಅವಶ್ಯಕತೆ. ವಸುಧೇಂದ್ರ