ನಾವು ಕಳಚಿಕೊಂಡ, ಕಳಚಿಕೊಂಡಿದ್ದೇವೆ ಎಂದುಕೊಂಡ ಸಂಬಂಧಗಳೇ ನಮ್ಮನ್ನು ನಿರಂತರವಾಗಿ ಕಾಡುತ್ತ ಹೋಗುವ ರೀತಿ ಯನ್ನು ನಾಗರಾಜ ಮತ್ತೆ ಮತ್ತೆ ಎಂಬಂತೆ ವಿಷಾದದಿಂದ ಗಮನಿಸುತ್ತಲೇ ಹೋಗು ತ್ತಾರೆ. ಪಾತ್ರಗಳ ಹೆಸರು ಬೇರೆ. ಕಥಾ ಸಂದರ್ಭ ಬೇರೆ. ಬಾಧಿಸುತ್ತಿರುವ ಸಂಗತಿ ಮಾತ್ರ ಅದೇ. ಯಾವ ಮನುಷ್ಯ ಸಂಬಂಧವೂ ಪೂರ್ಣವಲ್ಲ, ಅಪೂರ್ಣವೂ ಅಲ್ಲ. ಶಾಶ್ವತವೂ ಅಲ್ಲ, ತಾತ್ಕಾಲಿಕವೂ ಅಲ್ಲ. ಮನುಷ್ಯ ಸಂಬಂಧಗಳಲ್ಲೇ ಅಂತ ರ್ಗತವಾಗಿರುವ ಈ ದುರಂತ, ನಾಗರಾಜ ರನ್ನು ನಿರಂತರವಾಗಿ ಕಾಡಿದೆ. ಇಂದಿನ ಕನ್ನಡ ಕಥನ ಸಂದರ್ಭದಲ್ಲಿ ಮನುಷ್ಯ ಮನುಷ್ಯರ ನಡುವಿನ ಅಂತರ್ಸಂಬಂಧ ಗಳು ಮತ್ತು ಅದರ ನೈತಿಕ ಸೂಕ್ಷ್ಮಗಳನ್ನು ಕುರಿತಂತೆ ನಾಗರಾಜರದ್ದೊಂದು ವಿಶಿಷ್ಟ ವಾದ ಒಂಟಿಧ್ವನಿ. - ಕೆ ಸತ್ಯನಾರಾಯಣ