" ನಾವು ಯಾರನಾರ ಅರ್ಥ ಮಾಡಿಕಂಡೀವಿ ಅನ್ನೂದು ನಮ್ಮ ಗ್ರಹಿಕೆಯೊಳಗನ ಇರತದ, ನಮ್ಮ ಸತ್ಯನೇ ಪೂರ್ಣ ಇರೋದಿಲ್ಲ.. ಅದ್ರಾಚಿಗೂ ಏನೋ ಇರತದ, ಬೂರಲ ಹತ್ತಿ ಹಾಂಗ ಹಾರತಿರ್ತದ. ಕೈಗೆ ಸಿಕ್ತು ಅಂತ ನಾವಂದ್ಕಳು ಹೊತ್ತಿಗಿ ಹತ್ತಿ ಹಾರಿ ಹೋಗಿರತದ.... ಕೈಯಾಗ ನಾಕ ಎಳಿ ಮೆತ್ತಿಕೊಂಡಿರತದ . ಅದರ ಪೂರ್ಣಸತ್ಯ ಅಂತ ತಿಳಕೋತೀವಿ." “ಯಾವಾಗ ಅವು ಗೆದ್ದೆ ಮಾಡಬ್ಯಾಡ ಅಂದರೋ ಆವಾಗ ನಮ್ಮಪ್ಪ ಸಂಜೆ ಮನೆಗೆ ಬಂದು ಹಿಂಗದು ಅಂದು ಅತ್ಯಂಡರು. ನಮ್ಮಪ್ಪನ ಮನ್ಸಿಗೆ ಅದೇ ದೊಡ್ಡ ಹೊಡ್ಡ ಕೊಟ್ಟದೆ, ಬೇಲಿ ಮರೇಲಿ ಆ ಕಡೆ ಮರದ ಮ್ಯಾಗೆ ಮಾಡ್ಕಂಡಿದ್ರು. ಹೆಗಲ ಮ್ಯಾಗಿದ್ದ ಟವೆಲ್ಲು ಕುತ್ತಿಗೆಯಾಗ ಇತ್ತು.” “ಎಲ್ಲದಕ್ಕೆ ಕಾರಣ ಇಲ್ಲೇಬೇಕು ಅಂತೂಇ ಕಾರಣ ಗೊತ್ತಾದ್ರೂ ವಾಸ್ತವ ಬದಲಾಗದಿಲ್ಲೆ ಅಂಥದೊಂದು ಸಂಬಂಧ ಬ್ಯಾರೆ ಎಲ್ಲೋ ನಿಜ ಆಗದನ್ನು ನೀ ಕಂಡ್ಕಳಕು ಅಂದ್ರೆ ಮುಂದೆ ಹೋಗ್ತಲೇ ಇರಕು.” ಬದುಕಿಗೆ ಅಷ್ಟು ಹತ್ತಿರವಿದ್ದ ನೆಲಜಲದ ಅರಿವು ಅನಂತಕಾಲದಲ್ಲಿ ಎಲ್ಲೋ ಹೂತುಹೋಗಿ ನಂತರದ ಸಮುದಾಯವೊಂದು ಬದುಕಿನ ಮೂಲಭೂತ ಅಗತ್ಯಗಳಿಂದ ವಂಚಿತವಾಗಿ ಕತ್ತಲಕೂಪದಲ್ಲಿ ಮುಳುಗಿರುತ್ತೆ, ಹೊಸ್ತಿಲಿನಾಚೆ ಬಾಹ್ಯಾಕಾಶದವರೆಗೆ ತಾಂತ್ರಿಕ ಪರಿಣತಿಯ ಏಣಿಯ ಮೆಟ್ಟಲುಗಳಲ್ಲಿ ನವಸಮುದಾಯವೊಂದು ಮೇಲೆ ಏರುತ್ತಲೇ ಹೋಗುತ್ತಿರುತ್ತದೆ... 'ಈ ಹಾಡು ಮತ್ತೆ ಕೇಳುತ್ತಿರುವೆ.. ಎಂದಾದರೊಮ್ಮೆ ನಿಜವಾದೀತೆಂಬ ನಿರೀಕ್ಷೆಯಲ್ಲಿ... ನಿಜವಾಗುವುದೆಂಬ ಭರವಸೆಯಲ್ಲಿ'