1920ರల్లి ಬಿಲ್ಲಿ ವಿಲಿಯಮ್ಸ್ ಬರ್ಮಾದಲ್ಲಿದ್ದ ಬ್ರಿಟಿಷ್ ತೇಗದ ಕಂಪನಿಯೊಂದರಲ್ಲಿ ಅರಣ್ಯ ನೌಕರನಾಗಿ ಕೆಲಸಮಾಡಲು ಬಂದಿಳಿದಿದ್ದ. ಅಲ್ಲಿನ ತೇಗದ ಕ್ಯಾಂಪುಗಳಲ್ಲಿ ದಿಮ್ಮಿಗಳ ಸಾಗಾಟಕ್ಕೆ ಬಳಸಲಾಗುತ್ತಿದ್ದ ಭವ್ಯ ಜೀವಿಗಳ ಅನಾದ ಬುದ್ಧಿಮತ್ತೆ ಹಾಗೂ ಗುಣನಡತೆಗಳಿಗೆ ಮನಸೋತು ಅವುಗಳ ಒಡನಾಟದಲ್ಲಿ ಮೇಧಾವಿಯಾದ 'ಚನೆವಾತನೇ ಆಗಿಬಿಟ್ಟಿದ್ದ ಈ ಕೃತಿಯಲ್ಲಿ ಲೇಖಕಿ ವಿಕಿ ಕಾನ್ ಸ್ಚಂಟೇನ್ ಕ್ರುಕ್ ಅವರು ವಿಲಿಯಂಮ್ಸ್ ತನ್ನೊಡನಿದ್ದ ಆನೆಗಳಿಂದ ಧೈರ್ಯ, ವಿಶ್ವಾಸ ಮತ್ತು ಕೃತಜ್ಞತೆಗಳ ಅಮೂಲ್ಯ ಜೀವನಪಾಠಗಳನ್ನು ಕಲಿಯುತ್ತಾ ಹೋದಂತೆ ಅವುಗಳ ಬಗೆಗಿನ ಆತನ ಪ್ರೇಮ ದುಪ್ಪಟ್ಟಾಗುತ್ತಿದ್ದುದನ್ನು ಸವಿವರವಾಗಿ ದಾಖಲಿಸುತ್ತಾರೆ. ಆತನ ಗಜಪಡೆಯ ಸೈನಿಕರಿಗೆ ಮತ್ತು ನಿರಾಶ್ರಿತರಿಗೆ ಬೇಕಾದ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಸಾಗಿಸಲು ಸಹಾಯ ಮಾಡಿದ್ದವು; ಹಲವೆಡೆಗಳಲ್ಲಿ ಸೇತುವೆ ನಿರ್ಮಾಣ ಮಾಡಿದ್ದವು ಮಾತ್ರವಲ್ಲ ಕಾಯಿಲೆ ಬಿದ್ದಿದ್ದ ರೋಗಿಗಳನ್ನು ಮತ್ತು ವೃದ್ದರನ್ನು ಹೊತ್ತುಕೊಂಡು ಅತ್ಯಂತ ಕಡಿದಾದ ಪರ್ವತವನ್ನು ಚಾರಣಮಾಡಿ ಕ್ರಮಿಸಿ ಯುದ್ಧದಿಂದ ದೂರ ಕರೆದೊಯ್ಯು ಕಾಪಾಡಿದ್ದವು. ಒಂದಿಷ್ಟು ಆತ್ಮಕತೆ, ಇನ್ನೊಂದಿಷ್ಟು ಯುದ್ಧದ ಕತೆಯೋ ಎಂಬಂತೆ ಅನಿಸುವ ಈ ಕೃತಿಯು ಯುದ್ಧಕಾಲದಲ್ಲಿ ಯಾರ ಗಮನಕ್ಕೂ ಬಾರದೆ ಸಂಪೂರ್ಣವಾಗಿ ತೆರೆಯ ಮರೆಗೆ ಸರಿದುಹೋಗುವ ಅದ್ಭುತ ಶೌರ್ಯಸಾಹಸಗಳ ಹಾಗೂ ಚಾರಿತ್ರಿಕ ಘಟನೆಗಳ ಕಡೆಗೆ ಬೆಳಕು ಚೆಲ್ಲುವ ಒಂದು ಸ್ಪೂರ್ತಿದಾಯಕ ನಿರೂಪಣೆ,