ಮನೆಗೆ ಹೋಗುವ ದಿನ ಮಾಡಲು ರಾಧಳಿಗೆ ಒಂದಿಷ್ಟು ಹಣ್ಣು-ಹಂಪಲುಗಳನ್ನು ಕೊಟ್ಟರು, ಅವುಗಳ ಮೇಲಿಟ್ಟಿದ್ದ ನೋಟುಗಳನ್ನು ನಯವಾಗಿ ನಿರಾಕರಿಸಿದ ರಾಧ ಏನ್ರಿ ಮಾಸ್ತರರ... ನಿಮ್ಮ ಹತ್ತಿರ ಹಣ ಹೆಂಗೆ ತೊಗಳಿ ಕಾಗ್ತದೆ ರೀ...ಅಂತಂದಳು ಹಂಗಲ್ಲಮ್ಮ ಇಷ್ಟು ಹಚ್ಚಿಕೊಂಡು ಮಾಡಿದ್ದೀನಿ... ಅದಕ್ಕೆ ಪ್ರತಿಯಾಗಿ ನಾವು ಏನಾರ ಕೊಡಬೇಕೋ ಬ್ಯಾಡೋ...' ಅಂತಂದರು, 'ಮಾಸ್ತರರ ಬದುಕು ಮಾಡೋದು ಹೆಂಗೆ ಅಂತ ಕಲಿಸಿ ಕೊಟ್ಟರಿ, ಅದಕ್ಕಿಂತ ದೊಡ್ಡದು ಬೇರೆ ಏನು ಕೊಡಲಿಕ್ಕೆ ಆಗ್ತೈತೆ ಬಿಡ್ರಿ ಅಂತಂದು ಖಡಾಖಂಡಿತವಾಗಿ ಹಣವನ್ನು ನಿರಾಕರಿಸಿಬಿಟ್ಟಳು. ಕಾರಿನ ತನಕ ಬಂದು, ಮಗುವಿನ ಮೂಗನ್ನು *ಅ...ಲ...ಲಾ...' ಎಂದು ಅಲ್ಲಾಡಿಸಿ ಬೀಳ್ಕೊಟ್ಟಳು.
ಕಾರಿನಲ್ಲಿ ವಾಪಾಸು ಮನೆಗೆ ಹೋಗುವಾಗ ಪ್ರಹ್ಲಾದ ಮಾತನಾಡಿದ. 'ಅಪ್ಪ ರಾಧಳಂತಹ ವ್ಯಕ್ತಿ ನನ್ನ ಜೀವನದಲ್ಲಿ ಖಂಡಿತಾ ಸಿಗಂಗಿಲ್ಲ ಅನಿಸ್ತದೆ. ಹಗಲು-ರಾತ್ರಿ ಖಬರಿಲ್ಲದಂಗೆ ದುಡಿದು ಯಾರೋ ಅಮೇರಿಕಾದವರು ಉಪಯೋಗಿಸುವಂತಹ ಸಾಫ್ಟ್ವೇರ್ ಬರಿತೀವಿ ಅವರಿಗೆ ನಾವ್ಯಾರೋ ಗೊತ್ತಿಲ್ಲ ನಮಗೆ ಅವರು ಯಾರೋ ಗೊತ್ತಿಲ್ಲ. ಇಬ್ಬರಿಗೂ ಗೊತ್ತಿರೋದು ಆ ಕೆಲಸಕ್ಕಾಗಿ ನಿಗದಿಯಾಗಿರೋ ಬಡ್ಡಟ್ ಮಾತ್ರ...' ಅಂತಂದೆ. ಲೇಖಾಳ ತೊಡೆಯಲ್ಲಿ ಮಲಗಿ ನಿದ್ರೆ ಹೊಡೆಯುತ್ತಿದ್ದ ಸುಕುಮಾರನಿಗೆ ಅದೇನರ್ಥವಾಯಿತೋ ಗೊತ್ತಿಲ್ಲ ಸಣ್ಣಗೆ ನಕ್ಕ!