ಕಥೆ ಕವನಗಳ ಜೊತೆಜೊತೆಯಲ್ಲಿಯೇ ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲರಾಗಿರುವ ಅಶೋಕ್ ಕುಮಾರ್ ಡಿಸಿ ಅವರ ವೈಶಿಷ್ಟ್ಯವೇನೆಂದರೆ, ಅವರು ಅಕಾಡೆಮಿಕ್ ಸಾಹಿತ್ಯ ವಲಯದಿಂದ ಬಂದವರಲ್ಲ. ಸಾಹಿತ್ಯೋಪ ಜೀವಿಯಲ್ಲ. ತಮ್ಮ ಜೀವನಾನುಭವದ ಸಹೋತ್ಪನ್ನವಾಗಿ ಸಾಹಿತ್ಯದ ಸಹಜ ಕೃಷಿಯಲ್ಲಿ ತೊಡಗಿಕೊಂಡಿರುವವರು. ಇಂಥ ಅನೇಕರಿಂದ ಇಂದಿನ ಕನ್ನಡ ಸಾಹಿತ್ಯ ಹೊಸತನ, ವೈವಿಧ್ಯತೆ ಮತ್ತು ಸಮೃದ್ಧಿಗೊಂಡಿರುವುದು ನಿಜ.
ಒಂದೇ ಸಮಕಾಲೀನ ವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ಈಗಾಗಲೇ 'ನೈಂಟಿ' ಮತ್ತು 101 ಹಣಗವನಗಳು ಎಂಬ ಹನಿಗವನಗಳ ಗಮನಾರ್ಹ ಮತ್ತು ಜನಪ್ರಿಯವೂ ಆದ ಸಂಕಲನಗಳನ್ನು ಹೊರತಂದಿದ್ದಾರೆ. ಇದೀಗ ಕಾಲೇಜಿನ ವಿದ್ಯಮಾನಗಳನ್ನು ಹೊರತಂದಿದ್ದಾರೆ. ಇದೀಗ ಕಾಲೇಜಿನ ವಿದ್ಯಮಾನಗಳನ್ನು ಆಧರಿಸಿದ *90@ಕಾಲ್ age ಕ್ಯಾಂಪಸ್' ಎಂಬ ಹನಿಗವನಗಳ
ಸಂಕಲನವನ್ನು ಹೊರತರಲು ಮುಂದಾಗಿದ್ದಾರೆ. ತನ್ನೆಲ್ಲ ಇತಿ ಮಿತಿಗಳ ನಡುವೆಯೂ ಈ ಸಂಕಲನ ಹಲವಾರು ಉತ್ತಮ ರಚನೆಗಳಿಂದ ಆಕರ್ಷಕವಾಗಿದೆ. ಇದರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲೆಂದು ಹಾರೈಸುತ್ತೇನೆ.
ಬಿ.ಆರ್. ಲಕ್ಷ್ಮಣರಾವ್