ಆಹಾರವನ್ನು ಏಕಾಂತದಲ್ಲಿ ಸೇವಿಸಬೇಕು. ಅನ್ನವೇ ಬ್ರಹ್ಮ, ರಸವೇ ವಿಷ್ಣು. ಊಟಿ ಮಾಡುವವನೇ ಮಹೇಶ್ವರ ಎಂಬ ಭಾವನೆಯಿಂದ ಊಟ ಮಾಡಿದಾಗ ಸೃಷ್ಟಿಯಾಗದು ಎನ್ನುವ ಉಲ್ಲೇಖಗಳಿವೆ. “ಪೂರ್ವದಿಕ್ಕಿಗೆ ಕುಳಿತು ಊಟ ಮಾಡಿದರೆ ಆಯುಸ್ಸು ವೃದ್ಧಿ, ದಕ್ಷಿಣ ದಿಕ್ಕಿಗೆ ಮುಖ ಮಾಡಿದರೆ ಯಶಸ್ಸು. ಪಶ್ಚಿಮಾಭಿಮುಖವಾಗಿ ಕುಳಿತು ಉಂಡರೆ ಸಂಪದಭಿವೃದ್ದಿ ಉತ್ತರಾಭಿಮುಖವಾಗಿ ಕುಳಿತು ಉಂಡರೆ ಆಡುವ ಮಾತು ಸತ್ಯ”, ಇಂತಹ ಉಣ್ಣುವ ಕಲೆ-ವಿಧಾನ ಗ್ರಂಥಗಳಲ್ಲಿವೆ. (ಮನುಸ್ಮೃತಿ-ಶಿವತತ್ವ ರತ್ನಾಕರ) ತನ್ನ ಎಂಜಲನ್ನು ಇತರರಿಗೆ ನೀಡಬಾರದು.
ಅಡುಗೆಮನೆ ಒಲೆಯ ವಿವರ ಓದಿರಿ “ಅಡುಗೆ ಮನೆ ವಿಸ್ತಾರ 32 ಹಸ್ತ (ಮೂರು), ಅಗಲ ಎಂಟು ಹಸ್ತವಿರಲಿ, ಈ ಮನೆಯ ಪೂರ್ವಕ್ಕೆ ಒಲೆಯಿರಲಿ. ಹಸುವಿನ ಬಾಲದಾಕಾರದ ನವಲಿ, ಕಬ್ಬಿಣ, ಇಟ್ಟಿಗೆ, ಮಣ್ಣಿನಿಂದ ಒಲೆ ಆಗ್ನೆಯ ಮೂಲೆಯಲ್ಲಿ ಬೆಂಕಿ ಇರಿಸಿರಿ. ಈ ಮಟ್ಟಿರಲಿ. ವಾಯುವ್ಯ ಒರಳು ಕಲ್ಲು. ಪಶ್ಚಿಮಕ್ಕೇರಳ ನೀರು ಕುಂಭ, ನೈರುತ್ಯಕ್ಕೆ ಈಳಿಗೆ, ತುರಿಮಣೆಗಳಿರಲಿ. ಉತ್ತರಕ್ಕಿರಲಿ ಮೊರ, ಪೊರಕೆಗಳು, ಒನಕೆ, ಹಾರೆಗೋಲುಗಳ ಸಾ ಪೂರ್ವದಲ್ಲಿ ಮಡಕೆ, ಕುಡಿಕೆ, ಪಾತ್ರೆ ಪರಡಿಗಳಿಗೂ ಅದೇ ದಿಕ್ಕು ಸೂಕ್ತ. ತರಕಾರಿ ಶೋಧಿಸಲು ದಿಕ್ಕು ಈಶಾನ್ಯ. ಎಂತಹ ಶಿಸ್ತುಬದ್ಧ ಜೀವನ, ನಮ್ಮ ಪೂರ್ವಿಕರದಾಗಿತ್ತು ಎಂಬ ದೃಷ್ಟಾಂತವನ್ನು ಇಲ್ಲಿ ಓದುವಿರಿ.
ಮಂಗರಸನ MENU ಪ್ರಪಂಚದ ಪ್ರಪ್ರಥಮ ಅಡುಗೆ ಪುಸ್ತಕವಾಗಿದ್ದು, ವೈವಿಧ್ಯತೆಯಿಂದ ಕೂಡಿದೆ. ಇಲ್ಲಿರುವ ಅಡುಗೆಯ ಹೆಸರುಗಳನ್ನು ಈಗಿನ ತಲೆಮಾರಿನ ಜನ ಕೇಳಿರಲಿಕ್ಕೂ ಸಾಧ್ಯವಿಲ್ಲ. ಹೆಸರೇ ಸೂಚಿಸಿರುವಂತೆ ಇದು ಅರಮನೆಯ ಅಡುಗೆ. ಮಾಡಿ ಸವಿಯಲು ಅತ್ಯಂತ ರುಚಿಯುಳ್ಳದು ಹಾಗೂ ಆರೋಗ್ಯಪೂರ್ಣವಾದದ್ದು.