ಭಾರತೀಯ ಜೇವನದಲ್ಲಿ ಪ್ರಜ್ಞೆಯ ವಿಕಾಸದ ಮನಸ್ಸಿನ ಆಳ ಅಗಲಗಳ ವಿಸ್ತಾರ ಪರಿಚಯ ಸಿಗುವುದು ಬೌದ್ಧಧರ್ಮದಲ್ಲಿ ವೇದ ಉಪನಿಷತ್ತಿನ ಕಾಲದ ನಂತರ ಬಂದ ಬೌದ್ಧಧರ್ಮ ವಯಸ್ಸಿನಲ್ಲಿ ಜೈನಧರ್ಮಕ್ಕಿಂತ ಕಿರಿದು ಅದು ಭಾರತದ ಒಳಗೆ ಹಬ್ಬಿತು ಮತ್ತು ಹೊರಗೆ ಹರಡಿತು.ಕಲೆ,ತಂತ್ರಶಾಸ್ತ್ರ, ವಾಸ್ತುಶಿಲ್ಪ ,ಶಾಸನ ,ಸಾಹಿತ್ಯ, ದರ್ಶನದ ವಿಕಾಸಕ್ಕೆ ಜಾಗ ಮಾಡಿಕೊಟ್ಟಿತು.ಬೌದ್ಧಧರ್ಮ ಮುಖ್ಯವಾಗಿ ಬೋಧಿಸುವುದು ಏನನ್ನು? ಅದರ ಚಿಂತನೆ ಹೇಗಿದೆ? ಎಂಬ ಕೆಲವು ವಿಚಾರಗಳ ಕಥನವನ್ನು ಡಾ ಜಿ ಬಿ ಹರೀಶ್ ರ ಕೃತಿ ತೆರೆದಿಡುತ್ತದೆ. ಬೌದ್ಧರ ಭಗವದ್ಗೀತೆಯಾಗಿರುವ ಬುದ್ಧ ಬೋಧಿಸಿದ ಧರ್ಮಪದದ ಹರೀಶ್ ಅವರ ಅನುವಾದವು ಇದರಲ್ಲಿ ಸೇರಿದೆ.