....ದಾಸಿಯರಿಗೆ ತಕ್ಕ ಹಾಗೆ ,ಮಹಾರಾಜರೊಂದಿಗೆ ದುರ್ಗದ ಪರಿವಾರದ ಸಹಾಯಕರು ಬಂದಿದ್ದ ಬಂಡಿಯಲ್ಲಿ ಕೂರಲು ಹೋದೆ .ಆದರೆ ಮಹಾರಾಜರು ನನ್ನ ಅವರ ರಥದಲ್ಲಿಯೇ ಕೂರಿಸಿಕೊಂಡರು.ಈ ದೃಶ್ಯವನ್ನು ಅರಮನೆಯ ಸಮಸ್ತ ದಾಸ -ದಾಸಿಯರೂ ನಿಂತು ನೋಡುತ್ತಿದ್ದರು.ಮಹಾರಾಜರನ್ನು ಬೀಳ್ಕೊಡಲು ಬಂದಿದ್ದ ತಿಮಣ್ಣರಾಯರಿಗೆ,ರಾಣೀವಾಸ --ದವರಿಗೆ , ಏನನ್ನಿಸಿತೋ,ಅವರ ಮುಖಗಳನ್ನು ನೋಡಲು ನನಗೆ ಧೈರ್ಯವಾಗಲಿಲ್ಲ. ನನ್ನ ತಾಯಿಗೆ ಅದು ಹೇಗೋ ಸುದ್ದಿ ತಲುಪಿ, ಆಕೆಯೂ ಬಂದಿದ್ದಳಂತೆ. ಇತ್ತೀಚೆಗೆ ನನ್ನ ನೋಡಲು ದುರ್ಗಕ್ಕೆ ಬಂದಿದ್ದಾಗ ಹೇಳಿದಳು. ಆದರೆ, ಮಹಾರಾಜರ ಪಕ್ಕದಲ್ಲಿ ಕೂತಿದ್ದ ನನ್ನ ಜೊತೆ ಮಾತ -ನಾಡಿಸಲು ಸಂಕೋಚದ ಜೊತೆ, ಸಾಮಂತರಾಜನ ಪರಿವಾರದ ಎದುರು ಮಾತನಾಡಿಸಲು ತುಸು ಭಯವು ಇದ್ದದ್ದರಿಂದ, ಗುಂಪಿನ ನಡುವೆ ದೂರದಲ್ಲಿ ನಿಂತು ಕಣ್ಣೀರು ಹಾಕಿದಳಂತೆ. ದಾರಿಯಲ್ಲಿ ಮಹಾರಾಜರು ನನ್ನ ಕೈಗಳನ್ನು ಅವರ ಕೈಗಳಲ್ಲಿ ಹಿಡಿದಿದ್ದರು..ಸಾರಥಿಗೆ ಕೇಳದಂತೆ ಮೆಲ್ಲಗೆ ಹೇಳಿದರು..'ಪ್ರಾಣಿಗ್ರಹಣ ಮಾಡಿದ್ದೇನೆ..ನೀನು ನನ್ನ ರಾಣಿ..' ರಥವು ವೇಗವೂ ಅಲ್ಲದ, ನಿಧಾನವು ಅಲ್ಲದ ನಮ್ಮ ಕೋಮಲ ಭಾವನೆಗಳಿಗೆ ಭಂಗ ತರದಂತೆ ನಿಧಾನಗತಿಯಲ್ಲಿ ಚಲಿಸುತ್ತಿತ್ತು.ದಾಸಿಯರೂ ಕನಸು ಕಾಣಬಹುದು...! ( - ಈ ಕಥಾಸಂಕಲನದಲ್ಲಿ ಬರುವ ಪುಷ್ಪಗಂಧಿ ಎಂಬ ಕಥೆಯ ಸಾಲುಗಳು )