1981ರಿಂದ 1991 ಮತ್ತು 2004 ರಿಂದ 2014 ಹೀಗೆ 2 ಅವಧಿಗಳಲ್ಲಿ ಒಟ್ಟು 20 ವರ್ಷಗಳ ಕಾಲ ಭಾರತದ ಏಳಿಗೆ -
-ಗಾಗಿ ಸಂಕಲ್ಪಶಕ್ತಿ ಮತ್ತು ಏಕೋನಿಷ್ಠೆಗಳ ಬಲದಿಂದ ದುಡಿದ
ಅಪರೂಪದ ವ್ಯಕ್ತಿ ಸ್ಯಾಮ್ ಪಿತ್ರೊಡ ಇದಕ್ಕಾಗಿ ಅವರು
ಸರ್ಕಾರದ ಬೊಕ್ಕಸದಿಂದ ತೆಗೆದುಕೊಂಡ ಸಂಬಳ ವರ್ಷಕ್ಕೆ
ಒಂದು ರೂಪಾಯಿ ಅಷ್ಟೆ! ಆದರೆ ಅವರು ಟೆಕ್ನಾಲಜಿ ಮಿಷನ್ಸ್
ಪರಿಕಲ್ಪನೆಯಡಿ ದೇಶದ ದೂರಸಂಪರ್ಕ ಗ್ರಾಮೀಣ ಭಾಗ
-ಗಳಿಗೆ ಕುಡಿಯುವ ನೀರಿನ ಪೂರೈಕೆ, ಸಾಕ್ಷರತೆ, ಖಾದ್ಯ ತೈಲ,
ಪೋಲಿಯೊ ನಿರ್ಮೂಲನೆ,ಹೈನುಗಾರಿಕೆ ಕ್ಷೇತ್ರಗಳಲ್ಲಿ ಮಾಡಿ
-ದ ಸಾಧನೆ ಅನನ್ಯ.ಇದರ ಫಲಗಳನ್ನೆಲ್ಲ ಇಂದು ಭಾರತದ
ಕೋಟ್ಯಂತರ ಜನರು ಅನುಭವಿಸುತ್ತಿದ್ದಾರೆ.ಇಂದು ನಮ್ಮ
ಜನಜೀವನದ ಅವಿಭಾಜ್ಯ ಅಂಗವಾಗಿರುವ ಸಿ-ಡಾಟ್ ,
ಸಿ-ಡ್ಯಾಕ್,ರಾಷ್ಟ್ರೀಯ ಜ್ಞಾನ ಆಯೋಗ, ಮಾಹಿತಿ ಹಕ್ಕು...
ಇವೆಲ್ಲವೂ ಪಿತ್ರೊಡ ಅವರ ಪರಿಕಲ್ಪನೆಗಳೇ ಆಗಿವೆ.ತಂತ್ರ
-ಜ್ಞಾನದ ಮೂಲಕ ಜನರ ಅದರಲ್ಲೂ ಬಡವರ ಜನಜೀವನದ
ಗುಣಮಟ್ಟವನ್ನು ಸುಧಾರಿಸಬೇಕು ಎನ್ನುವ ಕಾಣ್ಕೆಯನ್ನು
ಹೊಂದಿರುವ ಇವರು ಅಪರೂಪದ ಸಾಧಕರು.ಕಳೆದ 50
ವರ್ಷಗಳಿಂದಲೂ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ.