ಇಲ್ಲಿನ ನಾಲ್ಕು ನಾಟಕಗಳು ನಾಲ್ಕು ವಿಭಿನ್ನ ಸಂದೇಶಗಳನ್ನು
ನೀಡುತ್ತವೆ.ಜಾನಪದ,ಸಾಂಸಾರಿಕ,ಪೌರಾಣಿಕ ವಸ್ತುಗಳನ್ನು
ಆಯ್ದು ಅದಕ್ಕೆ ಮಕ್ಕಳ ಭಾಷೆಯ,ನವುರಾದ ಹಾಸ್ಯದ
ಲೇಪನ ಕೊಟ್ಟು ಮಿರುಮಿರುಗುವಂತೆ ಮಾಡುವ ಕೌಶಲ್ಯ
-ವನ್ನು ಶ್ರೀಮತಿ ಆಶಾರಘು ಅವರು ಹೊಂದಿದ್ದಾರೆ. ಭಾಷೆಯ
ಮೇಲಿನ ಹಿಡಿತ,ರಂಗತಂತ್ರಗಳ ಬಳಕೆ,ಕಾಲ್ಪನಿಕತೆಯನ್ನು
ಮಕ್ಕಳ ಮಟ್ಟಕ್ಕೆ ಹೊಂದುವಂತೆ ದುಡಿಸಿಕೊಳ್ಳುವಿಕೆ,ರಂಗ
-ಕ್ರಿಯೆಗೆ ಅವಕಾಶ ನಿರ್ಮಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ
'ಬಂಗಾರದ ಪಂಜರ ಮತ್ತು ಇತರ ನಾಟಕಗಳು' ಸಂಕಲನ
ಯಶಸ್ಸಿನೆಡೆಗೆ ಸಾಗುತ್ತಿದೆ.