ಭಗವದ್ಗೀತೆಯಲ್ಲಿ ಇಲ್ಲದ ವಿಷಯಗಳೇ ಇಲ್ಲ ಎನ್ನುವಂತೆ ಯೋಗವಾಸಿಷ್ಠದಲ್ಲೂ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲಾ ಸಂಗತಿಗಳು ಅಡಗಿವೆ. ಶ್ರೀ ರಾಮಚಂದ್ರನು
ಒಬ್ಬ ಸಮರ್ಥ ರಾಜನಾಗಲು ಬೇಕಾದ ತಯಾರಿಗಳನ್ನು ನೀಡುವ ಸಂದರ್ಭದಲ್ಲಿ ವಸಿಷ್ಠರು ಸುಮಾರು 32,000 ಶ್ಲೋಕಗಳಲ್ಲಿ ಲೋಕದ ವಿವಿಧ ರೀತಿ-ನೀತಿಗಳನ್ನು ಅನೇಕ ಪಾತ್ರಗಳ ಮುಖಾಂತರ ವಿವರಿಸುತ್ತಾರೆ. ಇದರಿಂದಾಗಿ ಶ್ರೀ ರಾಮಚಂದ್ರನ ಮನೋವಿಕಾಸಕ್ಕೆ ಹೆಚ್ಚು ಒತ್ತು ಸಿಗುತ್ತದೆ ಇಂಥಾ ಗ್ರಂಥವನ್ನು ಓದುವುದರಿಂದ ಇಂಥಾ ಗ್ರಂಥಗಳಲ್ಲಿ ಅಡಕವಾಗಿರುವ ಕಥೆಗಳನ್ನು ಓದುವುದರಿಂದ ನಮ್ಮ ಮನೋವಿಕಾಸವೂ ಆಗುವುದರಲ್ಲಿ ಅನುಮಾನವೇ ಇಲ್ಲ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನರ್ಘ್ಯ ರತ್ನ ಯೋಗವಾಸಿಷ್ಠ ಅಂತೆಯೇ ಈ ಕಥೆಗಳೂ ಕೂಡಾ.